ಶ್ರೀ ಶಾರದಾ ಸ್ತುತಿ ಶತಕಂ
ಶ್ರೀಃ
ಮಹಾಕವಿ ಶ್ರೀ ತೆಲ್ಕಪಲ್ಲಿ ರಾಮಚಂದ್ರ ಶಾಸ್ತ್ರಿ ಪ್ರಣೀತಂ
ಶ್ರೀ ಶಾರದಾ ಸ್ತುತಿ ಶತಕಂ
ಶರತ್ಕೌಮುದೀ ಇತ್ಯಾಖ್ಯಯಾ ಕನ್ನಡ ವ್ಯಾಖ್ಯಯಾ ಸಮೇತಂ
kannada translation
by Sri K.N.Surya Narayana ,Malleswaram ,Banglore
ಕೋಟಿಂಕಂದರ್ಪ ದರ್ಪಖಡ್ಗಸ್ಯ !
ವಾಟೀಂ ವಿರಿಂಚಿವಿಹೃತೇಃ
ಪೇಟೀಂಜಗತಾ ಮುಪಾಸ್ಮಹೇ ವಾಣೀಂ || 31
ಓ ವಾಣಿ ! ಕವಿಗಳ ಕವಿತ್ವಕ್ಕೆ ಧಾರಾರೂಪಿಣಿ ನೀನು. ಮನ್ಮಥನ ದರ್ಪವೆಂಬ ಖಡ್ಗವನ್ನು ಬಗ್ಗಿಸುವವಳು ನೀನು. ಬ್ರಹ್ಮನ ವಿಹಾರದ ಸ್ಥಾನವು ನೀನು. ಜಗತ್ತಿನ ರತ್ನವು ನೀನು. ಅಂಥ ನಿನ್ನನ್ನು ಉಪಾಸಿಸುವೆ.
ಆಶಾಂತ ಚುಂಬಿ ವಿಕಸಿತ
ಕಾಶಾಭಂ ಕಾಮದಂ ಕಲಾ ಪೂರ್ಣಂ !
ಶ್ರೀ ಶಾರದಾಭಿದಂ ಹೃ
ತ್ಕೋಶಾಂತೇ ಲಸತುಭೇ ಪರಂಜ್ಯೋತಿಃ || 32
ಓ ಶಾರದೆ! ಎಲ್ಲೆಡೆ ವ್ಯಾಪಿಸಿ ಬೆಳಗುವ ಪರಂಜ್ಯೋತಿಯು ನೀನು. ಹುಲ್ಲಿನ ಹೂವಿನಂತೆ ಬಿಳುಪುಳ್ಳವಳು ನೀನು. ಕೋರಿಕೆಗಳನ್ನು ಪೂರೈಸಿವುವವಳು ನೀನು. ಎಲ್ಲ ಕಲೆಗಳಿಂದ ತುಂಬಿದವಳು ನೀನು. ಅಂಥಹ ನೀನು ನನ್ನ ಅಂತರಂಗದಲ್ಲಿ ಪ್ರಕಾಶಿಸು.
ಸ್ಫುರ ದಮಲೇತನುರೋಚಿಷಿ
ಸರಸಂ ವದನಂ ಸಮೀಕ್ಷ್ಯ ರುಚಿರಂತೇ !
ಶರದುದಿತಂ ಕಮಲಂ ನದ
ನೀರಗತಂ ಶಾರದೇ ಸ್ಮರಾಮೋಂಬ || 33
ಓ ತಾಯಿ ! ಸ್ವಚ್ಛವಾದ ದೇಹಕಾಂತಿಯಿಂದಕೂಡಿದ ಈ ನಿನ್ನ ಮುಖವು ಶರತ್ಕಾಲದಲ್ಲಿ ನಿರ್ಮಲವಾದ ನೀರಿನಿಂದ ಕೂಡಿದ ಸರೋವರದಲ್ಲಿಅರಳಿದ ಅರವಿಂದದಂತೆ ವಿರಾಜಿಸುತ್ತಿದೆ. ಓ ತಾಯಿ ಶಾರದೆ! ನಿನ್ನನ್ನು ಯಾವಾಗಲೂ ಸ್ಮರಿಸುವೆ.
ಮಹೇಂದ್ರ ನೀಲ ಸದೃಷೌ
ರ್ಮಾರ್ಕಲಾ ಪಂಡಿತೈಸ್ತವ ಬ್ರಾಹ್ಮೀ !
ಮಾತರ್ಹರ ದೃಷ್ಟಿಶರೈಃ
ಮಾಮಕ ಮಯಿ ಜಡಿಂ ಮತ್ತಮಾತಂಗಂ || 34
ಓ ಬ್ರಾಹ್ಮಿ! ನಿನ್ನ ನೋಟ ಮನ್ಮಥನ ಹೂಬಾಣಗಳಂಥಹುದು. ಇವು ಇಂದ್ರನೀಲಮಣಿಯ ಪ್ರಭೆಗೆ ಸದೃಶ. ಓ ತಾಯಿ! ಅಂಥಹ ಶ್ರೇಷ್ಠಕರವಾದ ನೋಟಗಳ ಶರದಿಂದ ಮತ್ತಮಾತಂಗದಲ್ಲಿರುವಂಥಹ ನನ್ನ ಜಡತ್ವವನ್ನು ಹೋಗಲಾಡಿಸು.
ಪಥ್ಯ ಮನರ್ಘ ವಶಿನಾಂ
ತಥ್ಯಂ ರಸ ಗಂಧ ಮೂಲ ಮಾದಿತ್ಯೈಃ !
ಸ್ತುತ್ಯಂಭವ ರೋಗಮ್ಮೇ
ನಿತ್ಯಂ ದ್ಯತು ಶಾರದಾಖ್ಯ ಭೈಷಜ್ಯಂ || 35
ಓ ತಾಯಿ! ಸಂಸಾರವೆಂಬ ರೋಗಕ್ಕೆ ರಸಗಂಧಾದಿಗಳು ಮೂಲಕಾರಣ. ಅದಕ್ಕೆ ಪಥ್ಯ ಅವಶ್ಯಕ. ಈ ರೋಗದ ನಿರ್ಮೂಲನೆಗೆ ಸದಾ ನಿನ್ನ ನಾಮಸ್ಮರಣೆಯೊಂದೇ ಔಷಧ.


Comments
Post a Comment